Monday, February 11, 2019

ತಂತ್ರಜ್ಞಾನವನ್ನು ಬಳಸಿ ಮುನ್ನಡೆಯುವುದು ಅಗತ್ಯ ಮಾತ್ರವಲ್ಲ, ಅನಿವಾರ್ಯ: ರಾಜೆನ್ ಪಡುಕೋಣೆ




 ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಆಶ್ರಯದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ    ದಿನಾಂಕ: 06-02-2019 ರಂದು ಬುಧವಾರ ಕನ್ನಡ ಸ್ಮಾರ್ಟ್ ಕ್ಲಾಸ್ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ವಿದ್ಯಾರ್ಥಿನಿಯರಾದ ಕು| ಅನಘ, ಕು| ಸಹನಾ, ಕು| ಶ್ರೀನಿಧಿ, ಕು| ಸುಷ್ಮಾ, ಕು| ಸೌಮ್ಯ ಇವರಿಂದ ಪ್ರಾರ್ಥನೆಯ ಮೂಲಕ ಆರಂಭಗೊಂಡಿತು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು ಪ್ರೌಢಶಾಲಾ ವಿಭಾಗ ಇವರು ಸರ್ವರನ್ನೂ ಸ್ವಾಗತಿಸಿ ಪ್ರಸ್ತುತ ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋ ಆರಂಭಗೊಂಡಿದ್ದು ಅದರ ಪ್ರಯೋಜನವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 14 ಸಂಸ್ಥೆಗಳು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಾರಂಭದಲ್ಲಿ 4 ಶಾಲೆಗಳಲ್ಲಿ ಆರಂಭಗೊಂಡ ವಚ್ರ್ಯುವಲ್ ಕ್ಲಾಸ್ ಇದೀಗ 80ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಉತ್ತಮ ಸಂಪನ್ಮೂಲ ಶಿಕ್ಷಕರಿಂದ ಪಾಠಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆಯುತ್ತಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸುವಲ್ಲಿ ತುಂಬಾ ಸಹಕಾರಿಯಾಗಿರುವುದು ಗಣನೀಯವಾಗಿ ಕಂಡು ಬರುತ್ತಿದೆ. 

ಸುಮಾರು 10ಕ್ಕಿಂತಲೂ ಹೆಚ್ಚು ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋಗಳನ್ನು ಹೊಂದಿದ್ದು ಮಕ್ಕಳಿಗೆ ತರಗತಿಯ ಅವಧಿಗೆ ಅಡ್ಡಿಯಾಗದಂತೆ ಪೂರಕವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದ ವಚ್ರ್ಯುವಲ್ ಕ್ಲಾಸ್‍ನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಜೆನ್ ಪಡುಕೋಣೆ-ಸಿಇಒ ಮಣಿಪಾಲ ಫೌಂಡೇಶನ್ ಬೆಂಗಳೂರು ಇವರು ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಮತ್ತು ಅದರ ಅಳವಡಿಕೆಯ ಮೂಲಕ ನಡೆಯುವ ವಚ್ರ್ಯುವಲ್ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಪೂರಕವಾಗಿದ್ದು ಮಹಾಮ್ಮಾಯ ಫೌಂಡೇಶನ್ ಈ ನಿಟ್ಟಿನಲ್ಲಿ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿದೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುವಲ್ಲಿ ಪೂರಕವಾಗಿದ್ದು ಕ್ಷಣದಲ್ಲಿಯೇ ಸಿದ್ಧವಾಗಿ ಅನಿಸಿಕೆಯನ್ನು ಹಂಚಿಕೊಂಡ ವಿದ್ಯಾರ್ಥಿನಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಅನಿಸಿಕೆಯನ್ನು ಮೆಚ್ಚಿಕೊಂಡು ಈ ವಚ್ರ್ಯುವಲ್ ಕ್ಲಾಸ್ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿ ಉತ್ತಮ ಭವಿಷ್ಯವನ್ನು ಹಾರೈಸಿದರು. ಸಭೆಯ ಅಧ್ಯಕ್ಷರಾಗಿದ್ದ ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ನಮ್ಮ ಸಂಸ್ಥೆಗೆ ಇಂತಹ ಒಂದು ಸುವರ್ಣ ಅವಕಾಶವನ್ನು ಒದಗಿಸಿದ ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಇದರ ಸಂಚಾಲಕರನ್ನು ಅಭಿವಂದಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ನಿವೇದಿತಾ-ವಿಜ್ಞಾನ ವಿಷಯ ಪರಿವೀಕ್ಷಕರು ಇವರು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿರುವ ಈ ಸಂಸ್ಥೆಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾ ಕಲಿಕೆಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ವಿಶೇಷ ಪರಿಣಾಮದ ಕುರಿತು ತಿಳಿಸಿದರು. ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ ವಿದ್ಯಾರ್ಥಿಗಳು ಅತ್ಯಂತ ಸಂತಸವನ್ನು ಅಭಿವ್ಯಕ್ತ ಪಡಿಸುತ್ತಾ ವಚ್ರ್ಯುವಲ್ ತರಗತಿಯಲ್ಲಿನ ಪಿಪಿಟಿ ಪ್ರೆಸೆಂಟೇಶನ್, ಆ್ಯನಿಮೇಷನ್, ವೀಡಿಯೋಗಳ ಮೂಲಕ ಪಾಠದ ಬೋಧನೆಯ ಪರಿಣಾಮವನ್ನು ತಿಳಿಸಿದರು. ಶ್ರೀ ಶಿವಾನಂದ-ಶಿಕ್ಷಣ ಸಂಯೋಜಕರು ಇವರು ತಂತ್ರಜ್ಞಾನದ ಮಹತ್ವ ಮತ್ತು ತರಗತಿಯಲ್ಲಿ ಅದರ ಅಳವಡಿಕೆಯ ಅಗತ್ಯ ಮತ್ತು ಅನಿವಾರ್ಯತೆ ಕುರಿತು ತಿಳಿಸಿದರು., ಶ್ರೀಮತಿ ಲಕ್ಷ್ಮೀ ಹೆಗಡೆ-ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ವಚ್ರ್ಯುವಲ್ ಕ್ಲಾಸ್‍ನಲ್ಲಿ ತೊಡಗಿಕೊಂಡಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳನ್ನು ಗೌರವಿಸಿದರು. ಶ್ರೀ ಉದಯ ಗಾಂವಕಾರ ಕಾರ್ಯಕ್ರಮವನ್ನು ನಿರೂಪಿಸಿದರು. ಆಧುನಿಕ ತಂತ್ರಜ್ಞಾನ ಯುಗದ ಅತ್ಯವಶ್ಯ ಅಂಗವಾಗಿ ಮೂಡಿಬಂದಿರುವ ವಚ್ರ್ಯುವಲ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವೂ ಆಕರ್ಷಣೀಯವಾಗಿ ಮೂಡಿ ಬಂದಿದೆ.


ಫೋಟೋ: ದ್ವಾರಕಾ ನಿರಂಜನ್

No comments:

Post a Comment